ಡಿಸಿಸಿ ಬ್ಯಾಂಕ್ ಕೊಲ್ಹಾರ ಶಾಖೆಗೆ ಗುಡದಿನ್ನಿ ಭೂಮಿ ಪೂಜೆ

ಕೊಲ್ಹಾರ: ಪಟ್ಟಣದಲ್ಲಿ ಸೋಮವಾರ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ ಕೊಲ್ಹಾರ ಶಾಖೆಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ನೇರವೇರಿಸಿದರು.
ಪಟ್ಟಣದ ನೂತನ ಶಾಖೆಯ ಕಟ್ಟಡದ ಭೂಮಿ ಪೂಜೆಯ ಸಾನಿಧ್ಯ ಕೊಲ್ಹಾರ ಹಿರೇಮಠದ ಪಡದಯ್ಯ ಹಿರೇಮಠ ಸ್ವಾಮೀಜಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ನಿರ್ದೇಶಕ ಶೇಖರ ಅ ದಳವಾಯಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಡಿ ಬಿರಾದಾರ, ಪ್ರಧಾನ ವ್ಯವಸ್ಥಾಪಕ ಪಿ ವಾಯ್ ಡೆಂಗಿ,ನೋಡಲ್ ಅಧಿಕಾರಿ ಎಸ್ ಬಿ ಹೊಸಮನಿ, ಹಿರಿಯ ವ್ಯವಸ್ಥಾಪಕ ರಾಜು ಬಿ ವಾಡೇದ, ಪಿಆರ್ ಓ ಆಯ್ ಎಸ್ ಸಂಖ, ಎಸ್ ಎಸ್ ಉಣ್ಣಿಬಾವಿ, ಎಮ್ ಎಸ್ ಯರಂತೇಲಿ,ಬಿ ಎಮ್ ಯಂಡಿಗೇರಿ, ರವಿಕುಮಾರ ಬಾಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.