ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ ವಿತರಣೆ

Feb 27, 2025 - 22:06
 0
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ ವಿತರಣೆ

ತಾಳಿಕೋಟಿ : ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕು,ಉನ್ನತ ಸ್ಥಾನದಲ್ಲಿ ಬೆಳೆದು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು  ಎಂದು ಸಮಾಜ ಸೇವಕ ಗೈಬುಸಾಬ ಅರಬ ಹೇಳಿದರು.

ಸರಕಾರಿ ಉರ್ದು ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆಯ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ,ಪೆನ್ನು , ಹಾಗೂ ಪೆನ್ಸಿಲ್ ವಿತರಿಸಿ ಅವರು ಮಾತನಾಡಿದರು.

ಮಕ್ಕಳು ಉನ್ನತ ಸ್ಥಾನದಲ್ಲಿರಬೇಕು ಎಂಬುವುದು ತಂದೆ-ತಾಯಿಯ ಕನಸು, ಮಕ್ಕಳು ಆ ಕನಸನ್ನು ನನಸು ಮಾಡಬೇಕು. ಪೋಷಕರು ಸಹ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡೆ-ತಡೆಯಾಗದಂತೆ ಸಹಕಾರ ನೀಡಬೇಕು, ಎಂದು ಹೇಳಿದರು ,

ಈ ವೇಳೆ ಮೆಹಬೂಬ ಅರಬ ಅವರು ಮಾತನಾಡಿ, ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ, ಮಕ್ಕಳು ಆದಷ್ಟೂ ವ್ಯಾಂಸಗಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹುಸೇನ್ ಭಾಷಾ ಉಣ್ಣಿಬಾವಿ , ಬಶೀರ್ ಅಹ್ಮದ್ ಹಂಡೆಬಾಗ, ಶಫೀಕ್ ಇನಾಮ್ದಾರ್, ಕಾಶಿಮ್ ಅಲಿ ಮನ್ಸೂರ್, ಆಸಿಫ ನಮಾಜಕಟ್ಟಿ,  ಮೆಹಬೂಬ ಲಾಹೋರಿ, ಕರೀಮ ಅವಟಿ , ಹಾಗೂ ಮುಖ್ಯ ಗುರುಗಳಾದ ಎ ಎಂ ನಗಾರ್ಚಿ , ಎಲ್ಲಾ ಶಿಕ್ಷಕರು ಮಕ್ಕಳು  ಉಪಸ್ಥಿತರಿದ್ದರು .

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.