ತಂದೆಯ ಸ್ಮರಣಾರ್ಥ : ಶಾಲೆಗೆ ಭೂದಾನ ನೀಡಲು ಮುಂದಾದ ಮಗ

Jan 22, 2025 - 08:07
 0
ತಂದೆಯ ಸ್ಮರಣಾರ್ಥ : ಶಾಲೆಗೆ ಭೂದಾನ ನೀಡಲು ಮುಂದಾದ ಮಗ
ವಿಜಯಪುರ ; ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ತೋಟದ (ಹೆಬ್ಬಾಳ) ವಸ್ತಿಯ ಸುಮಾರು ೧೨೦ ಮಕ್ಕಳು ಸಮೀಪದಲ್ಲಿ ಶಾಲೆ ಇಲ್ಲದೇ ಪ್ರತಿನಿತ್ಯ ೬-೮ ಕಿ.ಮೀ ನಡೆದುಕೊಂಡು ಹೋಗಿ ಶಾಲೆ ಕಲಿಯಬೇಕಾದ ಅನಿವಾರ್ಯತೆ ಇದೇ, ಅನೇಕ ಮಕ್ಕಳು ಸೌಕರ್ಯಗಳಿಲ್ಲದೇ ಶಾಲೆಯಿಂದ ಹೊರಗುಳಿಯುವಂತಾಗಿದೆ ಕೂಡಲೇ ಇಲ್ಲಿಗೊಂದು ಸರ್ಕಾರಿ ಪ್ರಾಥಮಿಕ ಶಾಲೆ ತೆರೆಯುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ  ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮಸ್ಥರಾದ ಗೇನೆಪ್ಪ ಬಿರಾದಾರ ಅವರು ಅವರ ತಂದೆಯ ಸ್ಮರಣಾರ್ಥವಾಗಿ ಅರ್ಧ ಎಕರೆ ಜಾಗೆಯನ್ನು   ಕೊಡುವುದಾಗಿ ಕಳೆದ ೩-೪ ವರ್ಷಗಳಿಂದ ಸಂಭAಧಿಸಿದ ಶಿಕ್ಷಣ ಇಲಾಖೆಗೆ ಹಲವಾರು ಭಾರಿ ಮನವಿ ಸಲ್ಲಿಸಿದ್ದಾಗ್ಯೂ ಕೂಡಾ ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ಇದರಿಂದ ದಯಾಳುಗಳಾದ ತಾವೂಗಳು ಕೂಡಲೇ ಈ ಊರಿನ ೧೨೦ ಮಕ್ಕಳ ಭವಿಷ್ಯ ನಿರ್ಮಿಸಲು ಅಲ್ಲಿಗೊಂದು ಶಾಲೆ ತೆರೆಯಲು ಹಾಗೂ ಮೂಲಭೂತ ಸೌಕರ್ಯ ಒÀದಗಿಸಿ ಶಿಕ್ಷಕರನ್ನು ನೇಮಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಕೊಳ್ಳುತ್ತೆವೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ  ರಾಮನಗೌಡ ಪಾಟೀಲ, ಹತ್ತಳ್ಳಿ ಗ್ರಾಮಸ್ಥರಾದ  ಗೇನೆಪ್ಪ ಬಿರಾದಾರ, ಶಿವಾನಂದ ದುಂಡಪ್ಪ ಬಿರಾದಾರ, ಮಹಾಧೇವಪ್ಪ ತೇಲಿ, ರಾಜೆಸಾ ನದಾಫ, ಜಕರಾಯ ಪೂಜಾರಿ ಸೇರಿದಂತೆ ಇತರರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.