ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ದುಶ್ಚಟವಾಗಿ ಪರಿಣಮಿಸಿದೆ : ಪಿಎಸ್‌ಐ ಅಂಗಡಿ

Feb 2, 2025 - 19:51
 0
ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ದುಶ್ಚಟವಾಗಿ ಪರಿಣಮಿಸಿದೆ : ಪಿಎಸ್‌ಐ ಅಂಗಡಿ

ಆಲಮೇಲ: ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣ ದುಶ್ಚಟವಾಗಿ ಪರಿಣಮಿಸಿದೆ ಅದರಿಂದ ಮುಕ್ತರಾಗಬೇಕು ಎಂದರೆ ಮಕ್ಕಳನ್ನ ಮೊಬೈಲದಿಂದ ದೂರವಿಟ್ಟು ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಿಎಸ್‌ಐ ಅರವಿಂದ ಅಂಗಡಿ ಹೇಳಿದರು

ರವಿವಾರ ಪಟ್ಟಣದ ಎ.ಕೆ. ನಂದಿ ಪದವಿ ಪೂರ್ವ ಕಾಲೇಜಿನ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದು ವೇಗದ ಯುಗವಿದ್ದು ಕ್ಷಣಕ್ಷಣಕ್ಕೂ ಸ್ಪರ್ದೇ ನಡೆಯುತಿದೆ ಸ್ಪರ್ದೇಗೆ ತಯಾರಾಗಬೇಕು ಎಂದುರೆ ಶಿಕ್ಷಣದಿಂದ ಮಾತ್ರ ಸಾದ್ಯ. ಶೋಶಿಯಲ ಮಿಡಾಯ ಹೆಚ್ಚು ಬಳಕೆ ಮಾಡಿದಂತೆ ಅಪರಾದ ಕೃತ್ಯಗಳು ಹೆಚ್ಚುತಿದೆ ಅದನ್ನು ತಡೆಗಟ್ಟಬೇಕು ಎಂದರೆ ಅವಶ್ಯಕತೆ ಇರುವದನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು ಹಾಗೂ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮೊಬೈಲದಿಂದ ದೂರವಿಟ್ಟು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು

ಉಪನ್ಯಾಸಕ ಎನ್.ಎಸ್. ದೇವರಮನಿ ಮಾತನಾಡಿ ಓರ್ವ ವ್ಯೆಕ್ತಿಯ ಭವಿಷ್ಯ ನಿರ್ಮಾಣವಾಗಬೇಕು ಎಂದರೆ ಅದು ಶಿಕ್ಷಣದಿಂದ ಮಾತ್ರ ಸಾದ್ಯ ಅದಕ್ಕೆ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂದಿನ ಸ್ಪರ್ದಾ ಯುಗದಲ್ಲಿ ಪೊಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಸಾಕಸ್ಟು ಶ್ರಮ ವಹಿಸುತ್ತಿದ್ದಾರೆ ಅವರ ಶ್ರಮಕ್ಕೆ ಫಲ ಸಿಗಬೇಕು ಎಂದರೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದ ವ್ಯಾಮೋಹಕ್ಕೆ ಒಳಗಾಗಿ ಸಂಸ್ಕಾರ ಮರೆಯಲಾಗುತ್ತಿದೆ ಸಂಸ್ಕಾರವೆ ಇಲ್ಲದಿಂದರೆ ಎಸ್ಟೆ ಶಿಕ್ಷಣವಂತರಾದರು ವ್ಯರ್ಥ ಎಂದು ಹೇಳಿದರು.

ಪ್ರಾಚಾರ್ಯ ಡಿ.ಎಸ್. ಉಟಗಿ, ಎಸ್.ಎಂ. ಉಪ್ಪಾರ ಮಾತನಾಡಿದರು.

ಆಡಳಿತಾಧಿಕಾರಿ ಎನ್.ಎ. ಬಿರಾದಾರ, ಪತ್ರಕರ್ತ ಅವಧೂತ ಬಂಡಗಾರ, ಉಪನ್ಯಾಸಕರಾದ ಸಿ.ಬಿ. ಚೌಹಾಣ, ಅಮರ ನಾರಯಣಕರ, ಎಂ.ಡಿ ಉಮರಾಣ , ಸಿ.ಎಸ್. ಬಿರಾದಾರ, ಸಿದ್ದು ಶಿವಗೊಂಡ, ಬಾಬು ನಿವಾಳೋಡಿ, ಕರಿಮ ಸೌದಾಗರ ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.